Wednesday, February 15, 2012

ಒಂದು ಮುತ್ತಿನ ಕತೆ


ನನ್ನ ಅಪ್ಸರೆಗೆಂದೇ
ಅರ್ಪಿಸಿದೆ
ಕಂಗೊಳಿಸುವ ಗುಲಾಬಿ ಹೂಗಳ
ಗೊಂಚಲೊಂದು

ಸವಿ ಮುತ್ತಿನ ಉತ್ತರಕ್ಕಾಗಿ
ಕಾಯುತ್ತಿದ್ದ ನನಗೆ
ನನ್ನವಳೆಂದಳು
"ಹೂವು ಚೆನ್ನ
ಆದರೆ ಚಿನ್ನವೆಲ್ಲಿ ನನ್ನ ಚಿನ್ನ,
ಮುತ್ತು ಬೇಕೆಂದರೆ
ತರಲಿಲ್ಲವೇಕೆ
ಒಂದಾದರು ಮುತ್ತು ರತ್ನ?"

ತಿಳಿಯಿತಾಗ, ಇದಲ್ಲಾ
ಪ್ರೇಮಿಗಳ ದಿನ
ಬದಲು ಪ್ರೇಮಿಗಳ
ಪರೀಕ್ಷಾ ದಿನ!
ಪೆಚ್ಚಾದ ಮೊಗದಲ್ಲಿ
ನಗುತ್ತಿತ್ತು ಕಿವಿಯಲ್ಲಿ
ಅವಳಿಟ್ಟ ಹೂವು!

ಹೊಸ ವರ್ಷದ ಹೊಸಿಲು ತುಳಿದು
ಮತ್ತೊಮ್ಮೆ ಬಂದಿದೆ ಸಂಕ್ರಾಂತಿ
ಈ ಬಾರಿಯಾದರೂ ಮಾಡೇ ಬಿಡುವಾ
some ಕ್ರಾಂತಿ ಎಂದೆನಿಸಿದೆ

ಸಂಭ್ರಮದ ಸುಗ್ಗಿ ಇಂದು
ಬಾಸುಮತಿ ಹುಗ್ಗಿ ತಿಂದು
ಐ.ಟಿ. ರೈತನಾದ ನಾನು
ಹಿತ್ತಲಲ್ಲಿ ಕೊತ್ತಂಬರಿ ಸೊಪ್ಪು
ಬೆಳೆದು ಬಿಡಲೇ?

ಹಿಮಾಲಯವನೇರಿದ ತೇನಸಿಂಗನೇ
ಸ್ಪೂರ್ತಿಯೆನಗೆ
ಕಾರು ಪಕ್ಕಕ್ಕಿಟ್ಟು
ಕಾಲ್ನಡಿಗೆಯಲ್ಲೇ
south mountain
ಏರಿ ಬಿಡಲೇ?

ಕ್ರಾಂತಿಕಾರಿ ಐಡಿಯಾಗಳು
ಹಲವಾರು
ಏನು ಮಾಡಿದರೇನು
ಭವ ಹಿಂಗದು
ದಾಸ ನಾನು
ಮಗನ ಮುಖಮಾರ್ಜನ
ಮನೆಯ ಒಪ್ಪ-ಓರಣ
ಮಾಡುವರೆಗೆ ಎಷ್ಟೇ ಹಿಗ್ಗಿದರೂ
ಹುಗ್ಗಿಯ ದರ್ಶನವಿಲ್ಲ

ಚಳಿ ಅಂತ ಸೂರ್ಯನೇ
ಬರ್ತಾನೆ ಲೇಟಾಗಿ
ಎದ್ದು ಮಾಡೋದೇನಿದೆ ಈಗ
ಅಂದ್ಳು ಹೆಂಡ್ತಿ ಲೈಟಾಗಿ
ಸಂಕ್ರಾಂತಿಯ ಕಾಂತಿ
ತಂದ ಈ ಮೆಸೇಜ್ ನಿಂದ
ಈಗ ಎಲ್ಲ ಕ್ಲಿಯರ್

ಓಂ ಶಾಂತಿ.. ಶಾಂತಿ.. ಶಾಂತಿ!


 

Monday, September 26, 2011

ಲಂಚಕ್ಕೆಲ್ಲಾ ಗಾಂಧಿನೇ ಕಾರಣ!

ಭ್ರಷ್ಟಾಚಾರದ ಪ್ರತಿ ಕೈ ಗೊಗೆರೆವ ತಾ-ತಾ
ಎನ್ನುವ ಪ್ರತಿ ನೋಟಿನ ಮೇಲೆ ಗಾಂಧೀ ತಾತಾ
ಲಂಚಕ್ಕೆಲ್ಲಾ ಗಾಂಧಿನೇ ಕಾರಣ!
ಪಾಪ ಈ ವಿಷಯ ತಿಳಿಯದ ಅಣ್ಣಾ
ಕೂತರು ಉಪವಾಸ-ಧಾರಣ

Sunday, July 17, 2011

ಕಾದಿದ್ದೇವೆ ಮೋಹಿನಿಗಾಗಿ!

ಅ(ಉ)ರಿಜೋನದ ಸೂರ್ಯ ಕಣಿವೆಯಲ್ಲಿ
ಬುಸುಗುಟ್ಟುವ ಬಿಸಿಲ ಧಗೆಯಲ್ಲಿ
ಬಳಲಿ ಬೆಂದು ಬೆಂಡಾಗುತ್ತಿರುವ
ಭಸ್ಮಾಸುರರು ನಾವು!

ಆದರೇನಂತೆ
ಫೀನಿಕ್ಸ್ ಪಕ್ಷಿಯಂತೆ
ದಿನದಿನವೂ ಗರಿಗೆದರುವ ಆಸೆ
ಬರುವಳೆಂದು ತಂಪಾಗಿಸುವಳೆಂದು
ಕಾದಿದ್ದೇವೆ ನಾವು
ಋತು-ಮೋಹಿನಿಗಾಗಿ!

Sunday, July 10, 2011

'సిరివెన్నెల' సీతారామ శాస్త్రి గారి -

ఎప్పుడూ ఒప్పుకోవద్దురా ఓటమి
ఎప్పుడూ వదలుకోవద్దుర ఓరిమి
విశ్రమించవద్దు ఎ క్షణం
విస్మరించవద్దు నిర్ణయం
అప్పుడే నీ జయం నిశ్చయం రా.. || ఎప్పుడూ... ||

నింగి ఎంత పెద్దదైన
రివ్వుమన్న గువ్వ పిల్ల
రెక్క ముందు తక్కువేనురా |౨|

సంద్రం ఎంత గొప్పదైన
ఈదుతున్న చేప పిల్ల
మోప్ప ముందు చిన్నదేనురా

పశ్చిమాన పొంచివుండి
రవిని మింగు అసురసంధ్య
ఒక్కనాడూ నెగ్గలేదురా

గుటుకపడని అగ్గివుండ
సాగారలనీదుకొంటు
తూరుపింట తేలుతుందిరా

నిశావిలాసం ఎంత సేపురా?
ఉషోదయాన్ని ఎవ్వడాపురా?
రగులుతున్న గుండేకూడా సూర్యగోళవంటిదేనురా || ఎప్పుడూ... ||

నొప్పిలేని నిమిషమేది
జననమైన మరణమైన
జీవితాన అడుగు అడుగునా |౨|

నీరసించి నిలిచిపోతే
నిమిషమైన నీది కాదు
బ్రతుకు అంటే నిత్య ఘర్షణ

దేహముంది ప్రాణముంది
నెత్తురుంది సత్తు ఉంది
ఇంతకన్నా సైన్యముండునా? |౨|

ఆశ నీకు అస్త్రమౌను
శ్వాస నీకు శస్త్రమౌను
ఆశయమ్ము సారదౌమురా

నిరంతరం ప్రయత్నమున్నదా
నిరాశకే నిరాశ పుట్టదా?

ఆయువంటు ఉన్నవరకు
చావు కూడా నెగ్గలేక
శవముపైనే గెలుపు చాటురా || ఎప్పుడూ.. ||

Wednesday, April 13, 2011

Quote -

“Many of life's circumstances are created by three basic choices: the disciplines you choose to keep, the people you choose to be with; and, the laws you choose to obey”-Charles Millhuff
Quote of the day -

కడుపు నిండితే కవిత్వం,
డొక్కా మాడితే విప్లవం!!

Tuesday, December 29, 2009

ಯಾವುದಾದರೇನು ಭಾಷೆ?

ಹರಿಯಬಿಡು ಮನೋಭಿಲಾಷೆ


ಗಣಕ ಇಲಿಯ ಬೆನ್ನತ್ತಿ ಮನ ಮಾರ್ಜಾಲ,

ಸುತ್ತಿ ಬರಲಿ ಸಪ್ತ ಸಾಗರ ಬೆಸೆಯುವ ಅಂತರ್ಜಾಲ

ಬದಿಗಿಡು ಕುಂದು ಕೊರತೆ,

ಜಿನುಗಲಿ ಭಾವನೆಗಳ ಒರತೆ,

ಬೆಳಗಲಿ ಪ್ರೀತಿಯ ಹಣತೆ

ಆಡುಮಾತು, ಗಾಳಿಮಾತು, ಪಿಸುಮಾತು

ಯಾವುದಾದರೇನು ಸವಿಮಾತು?

ಬೆಸೆಯಲಿ ಸ್ನೇಹ ಸೇತು

Saturday, May 23, 2009

ತೇನವಿನಾ

ಅಂತರಂಗದ ಅಭಿಸಾರಿಕೆಯ ಸಾಂಗತ್ಯದಲಿ
ಅನುರಕ್ತನಾಗಿ ಬಂದ ಗೆಳೆಯನನ್ನು
ನೀ ಯಾರೆಂದು ಪ್ರಶ್ನಿಸುವಾಗ
ಕಣ್ಣ ಕನ್ನಡಿಯಲ್ಲಿ ಪ್ರತಿಬಿಂಬಿಸದೆ ಅನುರಾಗದ ಕುರುಹು?

ನಸುಕಿನಲಿ ನಿನ್ನ ನಸುನಗುವಿನ ಮೊಗದ ನೆನಪೇ ಆತ್ಮಸ್ನಾನ;
ದಿನದ ಕ್ಷಣಕ್ಷಣವು ವಿರಹರವಿಯ ತಾಪದಿ ಬೆಂದು
ಮುಸ್ಸಂಜೆ ನಿನ್ನ ಮುಗುಳ್ನಗೆಗಾಗಿ ಅರಸುತ್ತ
ನಿಶೆಯಲ್ಲಿ ನನ್ನ ಅಪೂರ್ಣ ಅಸ್ತಿತ್ವ
ಕರಗಿ ಶೂನ್ಯವಾಗುವ ಮುನ್ನ
ನನ್ನಲ್ಲಿಳಿಯದ ಪ್ರೀತಿಯ ಸೆಲೆಗೆ
ನೆಲೆಯಾಗಿ ಬರಲಾರೆಯಾ?
ಸಂಭ್ರಮ ಸಮಾಗಮ ಸಂಕ್ರಮಣದ
ಕನಸು-ನನಸುಗಳ ನಡುವಿನಂತರವಾಗಿ
ಹೀಗೆ ಉಳಿಯುವೆಯಾ?

ಪ್ರೇಮಸ್ಪರ್ಶದ ಯಾಚನೆಯಲಿ
ಇನಿಯಳ ಸನಿಹವನು ಕೋರುವ,
ಆಲಿಂಗನದ ಅಮೃತಧಾರೆಯಲಿ
ಕರಗಿ ಹೋಗಲು ತವಕಿಸುವ
ಈ ತಪ್ತ ಹೃದಯದ
ಸುಪ್ತ ಭಾವನೆಗಳ ತಿಳಿಸುವುದೆಂತು?
ಈಗೇಕೆ, ಹೀಗೇಕೆ ಎಂಬೆಲ್ಲ
ಸಂದಿಗ್ಧ ಪ್ರಶ್ನೆಗಳ ಮೀರಿ ಬರುತಿರುವ
ಭಾವಪ್ರವಾಹದ ಅಲೆಗಳಿಗೆ ಸಿಕ್ಕಿ
ಅರೆಘಳಿಗೆ ನಿನ್ನಿರಿವು ಕಾಣದೆ ಮರುಗುವ ಎನಗೆ
ರಮಣ-ಮರಣಗಳ ನಡುವಿನಂತರ
ನೀನೆಂದು ಅರಿಯೆಯಾ?

ಅರ್ಥವಾಗದ ತುಡಿತ-ತುಮುಲ ತಾಳಲಾರದೆ
ಎದೆಯಿಂದುಕ್ಕಿ ಬಂದ ಕಣ್ಣಂಚಿನ
ಹನಿಯೊಂದು ಉಸುರುತಿದೆ
-ಕಾಲದಲಿ ಕರಗಿ ಹೊಗುವ ನಾನು-ನೀನುಗಳ ನಡುವೆ
ಭಾವವೊಂದೇ ನಿತ್ಯ, ಪ್ರೇಮವೊಂದೇ ಸತ್ಯ!